ತ್ರಿಶಂಕು ಸ್ಥಿತಿ

ಮುಗಿಲೆತ್ತರ ಏರುವ
ಹಾರುವ ತೇಲಾಡುವ
ಬಯಕೆ ಬಲಿತು ಹೆಮ್ಮರ
ಕಡಿದಾದ ದಾರಿ ಬಲುದೂರ.
ಕಾಣದ ತೀರ
ಗುರಿ ಸೇರುವ ಕಾತುರ
ಹುಚ್ಚು ಮನಸ್ಸಿಗಿಲ್ಲ ಕಡಿವಾಣ
ಪುಂಖಾನುಪುಂಖ ನಿರಾಸೆಯ ಬಾಣ
ಆಸೆಗಳು ಆಗಸದಷ್ಟು
ಕನಸುಗಳು ಕಡಲಿನಷ್ಟು
ನನಸಾಗದೆ ಉಳಿಯುವುದೇ ಹೆಚ್ಚು
ಭೋರ್‍ಗರೆಯುವ ಪ್ರವಾಹದೆದುರು
ಸೆಣಸಿ ಮುನ್ನುಗ್ಗುವ ಹುಚ್ಚು
ಮುಂದೆ ಸಾಗುವವರ ಹಿಂದೆ ತಳ್ಳಿ
ಮುನ್ನಡೆಯುವ ಕೆಚ್ಚು.
ಏರಬಹುದು ಮೇಲೇರಬಹುದು
ಏರಿದ ಮೇಲೇ
ಭಯ ಆತಂಕದ ನೋಟ
ಅಸ್ತಿತ್ವಕ್ಕಾಗಿ ಹೋರಾಟ
ಮೇಲೇರಿದರೆ ಹದ್ದುಗಳ ಕಾಟ
ಕೆಳಗಿಳಿದರೆ ಹಾವುಗಳ ಚೀರಾಟ
ಅತ್ತಲೂ ಇಲ್ಲದೆ ಇತ್ತಲೂ ಸಲ್ಲದೆ
ನಡುವೆ ತ್ರಿಶಂಕುವಿನ ಸ್ಥಿತಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಚನ ವಿಚಾರ – ಹೀಗೆ ಸಂತೋಷ
Next post ಕೂಡಲೇ

ಸಣ್ಣ ಕತೆ

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

cheap jordans|wholesale air max|wholesale jordans|wholesale jewelry|wholesale jerseys